ಅಮ್ಮ ಬಾರ
ದ ದಿನವಿದೆಯಾ!
ನಿತ್ಯ ನೆನಪಾಗುವಮ್ಮ
ನಿನ್ನೆಯೂ ಬಂದಳು
ನನ್ನ ಮಗು
ನನ್ನ ಹಾಡು ಎಂದಳು
ಮಮತೆ ಹರಿಯಿತು
ಕವಿತೆ ಬಾಷ್ಪವಾಯಿತು
ಚುಟುಕುಗಳು
ಅವಸರ ಅನಾಹುತ
ಪಿತ್ರೊಡಾಗೆ ಥೋಡಾ ಅವಸರ
ಒಡೆಯಲು, ಹಳಿಯಲು
ಸೆಳೆಯಲು, ಹರಿದು ಹಂಚಲು
ಮಾವೋ ಮುಖ ಮರೆಮಾಚಿ
ಮೇಯುವವರಿಗೇ ಸಮರ್ಪಿಸಲು
ಪರದೆ ಹಿಂದೆಯೇ ಇಡಬಹುದಿತ್ತು ಹಿಕಮತ್ತು
ಚುಕ್ಕಾಣಿ ಸಿಗುವ ಭ್ರಮೆಗೆ
ಆಣಿಮುತ್ತುಗಳುದುರಿತು
ಮತ್ತೆಡವಟ್ಟು
ಪಿತ್ರೊಡಾನ ಮೀರಿಸಿದ ಧೀರ
ರಂಜನೆಯ ಚೌಧರಿ ಅಧೀರ
ಚರ್ಮಗಳ ವರ್ಣ ‘ಸಂಶೋಧಕ’
ಭಾರತೀಯರ ಭೇದ ಕಾಯಕ
“ನೀ…”ಕೂಗಿ ಕೆರಳಿಸಿದ ಆಫ್ರಿಕ
ಅನರ್ಥದ “ಕಾ..ಕಾ..ಕಾ”
ಬೆದರಿಕೆ
“ಪಾಕಿನಲ್ಲಿದೆ ಬಾಂಬ್ ಎಚ್ಚರ!”
ಬೆದರಿಸಿದ್ದಾನೆ ಮಣಿ ಶಂಕರ
ನುಡಿದು ಮೋದಿಯ ಭವಿಷ್ಯ
ಮಣ್ಣು ಮುಕ್ಕಿದ್ದ ಮನುಷ್ಯ
ಊರಿದ ಹೊಸ ಭೀತಿ
ನಕ್ಕಳಾ ತಾಯಿ ಭಾರತಿ!
ಮಂದೆ ಮುಂದೆ
ಕೇಜ್ರಿವಾಲ್ ಗೆ ಕೊನೆಗೂ
ಸಿಕ್ಕಿತು ಜಾಮೀನು
ಹಿಂಬಾಲಕರು ತಿಂದರು ಜಾಮೂನು
ಚುನಾವಣೆ ಪ್ರಚಾರ
ಆಗಲಿದೆ ಜೋರು
ಮದ್ಯವೂ ಬಂದೀತೆ ಹರಿದಂತೆ ನೀರು
(Images courtesy:Google search)
ಬೆರಳಿಗೆ ಗುರುತು
ಬೆರಳಿಗೆ ಗುರುತು
ಕೋಟಿ ಕೋಟಿ ಬೆರಳುಗಳೇ
ಮಾಡಿಕೊಳ್ಳಿ ‘ತಿಲಕ’ ಧಾರಣೆ!
ಪ್ರಜಾಪ್ರಭುತ್ವದ ಕೀಲಿಯೇ
ಸಾರ್ವತ್ರಿಕ ಚುನಾವಣೆ
ವೋಟಿನ ನಂತರ
ಮತದಾನ ಮಾಡ ಹೊರಟೆ
ಸಿಕ್ಕಿತು ಸ್ವಾಗತ
ನಮಸ್ಕಾರ ಆದರ ಉಪಚಾರ
“ಇದೇ ಗುರುತಿಗೆ ಒತ್ತಿ” ಒತ್ತಾಯ
ಮರಳುವಾಗ
ನಾ ‘ಮಂಗ’ ಎಲ್ಲ ‘ಮಾಯ’
ಇದು ಸಮಯವಲ್ಲ!
ಈಗ ಪಂಚೆ ಸೀರೆ ಕುಕ್ಕರು
ಫ್ಯಾನ್ ಮೊಬೈಲ್ ಲಿಕ್ಕರು
ಕೊಳ್ಳುವಂಥ ಸಮಯವಲ್ಲ
ಚುನಾವಣೆ ಕಾಲ
ಹಣ ತೆತ್ತು ಕೊಂಡರೂ
ಸತ್ಯ ಯಾರೂ ನಂಬೋದಿಲ್ಲ!!
ಹನಿಗವನಗಳು
1
ಮಳೆಯಾಗದಿದ್ದರೇನು
ಆಶ್ವಾಸನೆಗಳದೇ ಮಹಾಪೂರ
ತಂಗಾಳಿ ಬೀಸದಿದ್ದರೇನು
‘ಗ್ಯಾರಂಟಿ’ ಬಲೆ ಬೀಸಿದ್ದಾರೆ ನೇರ
2
ಚುನಾವಣೆಗೆ ಹುಟ್ಟಿವೆ
‘ಚಿತ್ರ’ವಿಚಿತ್ರ ಘೋಷ ನುಡಿ
‘ಚೊಂಬು’ ಕೊಡುವರೆಂದು
‘ನಾಮ’ ಹಾಕುವವರ ಲೇವಡಿ
ಕೇಜ್ರಿವಾಲಾ ಕಾಲ
1
ಆಗ ತಿಂದರು ನುಂಗಿದರು
ಕೇಳಲಿಲ್ಲ ಯಾರೂ
ಈಗ ಮಾವಿನ ಹಣ್ಣು
ತಿನ್ನಲೂ ಹದ್ದಿನ ಕಣ್ಣು
2
ಮನೆಯದೇ ಊಟ
ಕಳಿಸುತ್ತಿದ್ದಾರಂತೆ ಜೈಲಿಗೆ
ಅದಕ್ಕೇ ಜೀವ ಭಯ
ಬಂದಿತೇ ಕೇಜ್ರಿಗೆ!?
3
‘ಇಡಿ’ಯನ್ನು ಛೂಬಿಡಿ
ಸಲಹೆ ಕೊಡುತ್ತಿದ್ದವರೇ
‘ಇಡಿ’ಗೇ ಆರೋಪ ಕೈಬಿಡಿ
ಅನ್ನೊ ಬೇಡಿಕೆ ಸರಿಯೆ!?
ವಿಶ್ವ ಪುಸ್ತಕ ದಿನ
ಜೈ ಶಂಕರ್
೧
ವಿದೇಶ ಸಚಿವರ ಮಾತು
ನೇರ ಖಚಿತ ಆಪ್ಯಾಯ
ಅವರ ನಡೆ ನುಡಿ ನಗೆ
ಸ್ವದೇಶದಲ್ಲೀಗ ಭಾರೀ ಜನಪ್ರಿಯ
೨
ಜೈಶಂಕರ್ ನಮಗೆ ಇಷ್ಟ
ಅವರ ಮಾತು ನಿರ್ದಿಷ್ಟ
ವಿದೇಶ ನೀತಿಯೂ ಸ್ಪಷ್ಟ
ಸ್ನೇಹದ ಕೈ ಚಾಚಿದವರಿಗೆ
ಬಾಂಧವ್ಯದ ಬಂಧವಿದೆ
ಕುಹಕವಾಡಿದವರಿಗೆ
ಬಿಸಿ ಮಾತ ಬರೆ ಇದೆ
೩
ಭಾರತ ವಿದೇಶಾಂಗ ಸಚಿವರಿಗೆ
ವಿದೇಶಿಯರಿಂದ ಮಾತಿನ ಬಾಣ
ಸಚಿವರದು ಮೆಲುದನಿ, ಕಿರುನಗೆ
ಉತ್ತರಗಳೋ ರಾಮಬಾಣದ ತೀಕ್ಷ್ಣ
೪
ಹೊರದೇಶಗಳ
ದಶಕಗಳ ಸದ್ದು ಗದ್ದಲ
ಅಪಸ್ವರ ಹದ್ದುಬಸ್ತಿಗೆ ತಂದರು
ಜೈಶಂಕರರು!
೫
ಸೊರೊಸ್ ದಂತ ಗೋಪುರದಿಂದ
ಬಂದ ಬಡಬಡಿಕೆಗೂ
ಇಲ್ಲಿನ ಚೀರುವಿಕೆಗೂ
ಇರುವ ಸಂಚಿನ ಆಳ
ಅನಾವರಿಣಿಸಿದರಾ ಜೈಶಂಕರ!
೬
ಭಾರತ ವಿದೇಶ ನೀತಿ
ಕೆಲವರು ಒಪ್ಪರು
ಅಪಸ್ವರದ ರೀತಿ
ಅವೆಲ್ಲಕ್ಕೀಗ ಇತಿಶ್ರೀ!
ಸ್ಪಷ್ಟ ನೇರಮಾತಿನ ಟಕ್ಕರ್
ಕೊಡುತ್ತಿರವವರು ಜೈಶಂಕರ್
ಯಾವ ಭಾವದ ನೆರಳು
ಮರಗಳ ಎಲೆಗಳ ಮರೆ
ಕೋಗಿಲೆ ಕಾಣದು ಎಲ್ಲೂ
ಯಾರೇ ಕೇಳಲಿ ಬಿಡಲಿ
ಎದೆ ಆಳದಿಂದಲದರ ಕುಕಿಲು
ಬಿಸಿಲಿನ ತಾಪಕೆ ಅದು ದೂರಿದೆಯೇ
ಸಹಿಸಲಾರದೇ ಬೇಗೆ ?
ನೆರಳಿನ ತಂಪ ಸವಿದು ಹೊಗಳಿದೆಯೇ
ಪ್ರಕೃತಿ ಇತ್ತ ಸೊಗಕೆ !
ಹಕ್ಕಿಯೊರಲ ಒಡಲಲಿ ಇದೆಯೆ
ಕರುಳ ಕತ್ತರಿಸಿ ಹಾರಿದ
ಅಮ್ಮನ ಕಾಣುವ ಬಯಕೆ
ಕೂಗುವ ಕಂಠದಿ ಕೇಳಿದೆಯೆ
ತುತ್ತನಿತ್ತೂ ಹೊರಹಾಕಿದ
ಸಾಕಿದ ತಾಯಿಯ ನೆನಕೆ
ಯಾವ ಭಾವ ಕೋಗಿಲೆ ಕೂಗಲಿ
ತುಂಬಿ ಹಾಡಾಗಿದೆಯೋ
ಕೇಳುವವನ ಭಾವದ ನೆರಳು
ಹಕ್ಕಿಯ ಕಂಠದಿ ಧ್ವನಿಸುತ್ತಿದೆಯೋ
ಅಭಿನಂದನ
ಬೇಂದ್ರೆ ಕಾವ್ಯ
ಕೊತಕೊತ ಕುದಿಯುವ
ಕಬ್ಬಿನ ಹಾಲು
ಕಬ್ಬಿಗ ಬೇಂದ್ರೆ
ಕಾವ್ಯದ ಸಾಲು
ತಣಿದರೆ ಬೆಲ್ಲ
ಸಿಹಿ ಗಟ್ಟಿ
ಸವಿದವರಿಗೆ ಅದು
ಪರಮಾರ್ಥದ ದಿಟ್ಟಿ