ವಲ್ಲಭಭಾಯ್

ಸ್ವಾತಂತ್ರ್ಯ ಹೋರಾಟ
ಪಟೇಲ್ ಮೂಲ ಮಂತ್ರ
ನಿಷ್ಠುರದ ನಡೆಯ ಧೀಮಂತ
ರಾಜಪಟ್ಟಗಳ ಸರಿಸಿ
ದೇಶ ಹೊಲಿದ
ಸ್ವಾರ್ಥವರಿಯದ ದಿಟ್ಟ
ಪ್ರಧಾನಿ ಪಟ್ಟವ ಬಿಟ್ಟ!
ತಾನುರಿದು ಬೆಳಕ ಹರಿಸಿ
ದೇಶದೇಕತೆಯ ಸಾಕಾರಗೊಳಿಸಿ
ಜನಮಾನಸದ ಸರದಾರನೆನಿಸಿ
ವಲ್ಲಭ ವಿಂಧ್ಯನಾದ
ವಂದ್ಯ‌ನಾದ

ವೈಷ್ಣವ ಜನತೋ…

ಗಾಂಧೀಜಿಯವರ ಅತಿ ಮೆಚ್ಚಿನ ಭಜನೆ ಗುಜರಾತಿ ಭಾಷೆಯಲ್ಲಿ ಬರೆದಿರುವ ಒಂದು ಭಕ್ತಿ ಗೀತೆ, ವೈಷ್ಣವ ಜನತೋ ತೇಣೆ ಕಹಿಯೆ…

ಹದಿನೈದನೇ ಶತಮಾನದಲ್ಲಿದ್ದ ಸಂತ ನರಸೀ ಭಗತರು ನಿಜವಾದ ವೈಷ್ಣವ (ಭಕ್ತ) ಹೇಗಿರಬೇಕೆನ್ನುವುದನ್ನು ಬಹಳ ಸುಂದರ, ಸರಳ ಶಬ್ಧಗಳಲ್ಲಿ ಹಾಡಿನ ರೂಪದಲ್ಲಿ ಬರೆದಿದ್ದಾರೆ.

ಈ ಭಜನೆ ಸಬರಮತಿ ಆಶ್ರಮದ ನಿತ್ಯ ಪ್ರಾರ್ಥನಾ ಗೀತೆಯಾಗಿತ್ತು.  ಅದು ಗಾಂಧೀಜಿಯ ಉಸಿರೇ ಆಗಿದ್ದ ಗೀತೆ. ಪುಟ್ಟ ಶಬ್ಧಗಳಲ್ಲಿ ಗಹನ ವಿಚಾರಗಳನ್ನು ಅದು ತಿಳಿಸುತ್ತದೆ.

ಒಬ್ಬ ಮನುಷ್ಯ ನಿಜವಾಗಿಯೂ ಸಜ್ಜನಿ, ದೈವ ಭಕ್ತ ಆಗಬೇಕಿದ್ದರೆ ಅವನು ಹೇಗಿರಬೇಕು ಅನ್ನುವುದನ್ನು ಗೀತೆ ತಿಳಿಸುವ ಸೊಬಗು ಚೆಂದದಲ್ಲಿ ಬಂದಿದೆ.  

“ಯಾರು ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುತ್ತಾನೊ
ಯಾರು ಅಹಂಕಾರ ತೊರೆದು ಉಪಕಾರ ಮಾಡುತ್ತಾನೊ,
ಯಾರು ವಿಶ್ವವನ್ನು ಆದರಿಸಿ, ಗೌರವಿಸುತ್ತಾನೊ
ಯಾರು ಮಾತು, ಕೃತಿ, ವಿಚಾರಗಳಲ್ಲಿ ಗಟ್ಟಿಯಾಗಿರುತ್ತಾನೊ,
ಯಾರು ಎಲ್ಲರನ್ನೂ ಸಮಭಾವದಲ್ಲಿ ಕಂಡು,  ಪರಸ್ತ್ರೀಯನ್ನು ತನ್ನ ತಾಯಿಯಂತೆಯೇ ಕಾಣುತ್ತಾನೊ

ಯಾರು ಅನೃತ ತೊರೆದು, ಪರ ಧನಕ್ಕೆ ಆಸೆಪಡದೆ, ರಾಗ, ದ್ವೇಷ ಕೋಪ ತೊರೆದು ವೈರಾಗ್ಯ ಭಾವದಲ್ಲಿರುತ್ತಾನೋ ಅವನು ನಿಜದ ಸಜ್ಜನ (ವೈಷ್ಣವ); ಅವನೇ ನಿಜ ಭಕ್ತ.
ಅಂಥವನಿಗೆ ಸಕಲ ತೀರ್ಥಕ್ಷೇತ್ರಗಳ ದರ್ಶನ ಮಾಡಿದ ಫಲ ಒಲಿದುಬರುತ್ತದೆ”

ಹೀಗೆ ತಿಳಿಸುವ ಈ ಭಜನೆಯ ತಿರುಳನ್ನು ಗಾಂಧೀಜಿ ತಮಗೆ ಆವಾಹಿಸಿಕೊಂಡರು ಅಂದರೆ ಉತ್ಪ್ರೇಕ್ಷೆಯಲ್ಲ.  ಅಲ್ಲಿಯ ನುಡಿಗಳ ಅಂತರಾರ್ಥವನ್ನು ಸಹಜವಾಗಿ ತನ್ನ ಜೀವನ ಶೈಲಿಗೆ ಅಳವಡಿಸಿಕೊಂಡರು. ಅದರಂತೆಯೇ ಅಕ್ಷರಶಃ ನಡೆದರು ಸಹಾ.

ಡಾ.ಎಂ.ಎಸ್ ಸುಬ್ಬಲಕ್ಷ್ಮಿ ಈ ಭಜನೆಯನ್ನು ಗಾಂಧೀಜಿಯವರಿಗೋಸ್ಕರವೆ ಕಲಿತು, ಅದನ್ನು ತಮ್ಮ ಸಿರಿ ಕಂಠದಲ್ಲಿ ಮನಮುಟ್ಟುವಂತೆ ಹಾಡಿ, ಗಾಂಧೀಜಿಗೆ ಕೇಳಿಸಿ ಕೃತಕೃತ್ಯತೆ ಅನುಭವಿಸಿದ್ದಾರೆ. 

ಇಂದು ಗಾಂಧೀಜಿಯವರ ಜನ್ಮದಿನ. ಅವರೆಂದಿಗೂ ನೆನೆಯುತ್ತಿದ್ದ ಆ ಸುಂದರ ಸಾಲುಗಳನ್ನು ಮೆಲುಕು ಹಾಕೋಣ. ಅದು ಗಾಂಧೀ ಜಯಂತಿ ದಿನದ ನಮ್ಮ ಸಾರ್ಥಕತೆಯ ಭಾವವೂ ಹೌದು.

(Pic courtesy:Google)

ಬಹದ್ದೂರ

ಶಾಸ್ತ್ರೀ ನಮ್ಮ
ಎರಡನೆ ಪ್ರಧಾನಿ
ದೇಶದ ಮುತ್ಸದ್ದಿ
ಮಹಾನ್ ಜ್ಞಾನಿ

ಪಾತಕಿ ಪಾಕಿನ
ಯುದ್ಧ ಉನ್ಮಾದಕೆ
ಆಯಿತು ಶಾಸ್ತಿ
ನುಗ್ಗೆ ಲಾಹೋರಿಗೆ

ಶಾಸ್ತ್ರೀ ನಡೆದರೂ
ಗಾಂಧೀ ಹಾದಿ
ಕಾದುವಾಗ ಲಾಲ್‌
ಬಹದೂರ್ ಗರಿ

ವಿಜಯದ ನಡಿಗೆಗೆ
ಸಂಚಿನ ಬೆನ್ನಿಗೆ,
ʼವಾಮನʼ ಆದನೆ
ʼಬಲಿʼ ಆ ವಿಧಿಗೆ