1
ಮಳೆಯಾಗದಿದ್ದರೇನು
ಆಶ್ವಾಸನೆಗಳದೇ ಮಹಾಪೂರ
ತಂಗಾಳಿ ಬೀಸದಿದ್ದರೇನು
‘ಗ್ಯಾರಂಟಿ’ ಬಲೆ ಬೀಸಿದ್ದಾರೆ ನೇರ
2
ಚುನಾವಣೆಗೆ ಹುಟ್ಟಿವೆ
‘ಚಿತ್ರ’ವಿಚಿತ್ರ ಘೋಷ ನುಡಿ
‘ಚೊಂಬು’ ಕೊಡುವರೆಂದು
‘ನಾಮ’ ಹಾಕುವವರ ಲೇವಡಿ
ಕೇಜ್ರಿವಾಲಾ ಕಾಲ
1
ಆಗ ತಿಂದರು ನುಂಗಿದರು
ಕೇಳಲಿಲ್ಲ ಯಾರೂ
ಈಗ ಮಾವಿನ ಹಣ್ಣು
ತಿನ್ನಲೂ ಹದ್ದಿನ ಕಣ್ಣು
2
ಮನೆಯದೇ ಊಟ
ಕಳಿಸುತ್ತಿದ್ದಾರಂತೆ ಜೈಲಿಗೆ
ಅದಕ್ಕೇ ಜೀವ ಭಯ
ಬಂದಿತೇ ಕೇಜ್ರಿಗೆ!?
3
‘ಇಡಿ’ಯನ್ನು ಛೂಬಿಡಿ
ಸಲಹೆ ಕೊಡುತ್ತಿದ್ದವರೇ
‘ಇಡಿ’ಗೇ ಆರೋಪ ಕೈಬಿಡಿ
ಅನ್ನೊ ಬೇಡಿಕೆ ಸರಿಯೆ!?