ನಾನು ಬಿದ್ದೆನೆಂದು ಆಲಾಪಿಸುತ್ತೇನೆ
ನೀನೇಕೆ ನನ್ನನ್ನು ಎತ್ತಿಕೊಳ್ಳಲಿಲ್ಲ ?
ಎಂದು ದೂರುವುದಿಲ್ಲ
ನಾನು ಜಾರಿದ್ದು ಕೆಸರಿನ ಮೇಲೇ ಹೌದು
ಕೆಸರು ರಾಚಿದ್ದು ನೀನೆಂದು
ಹೇಳುವ ಮನಸ್ಸಿಲ್ಲ
ಸ್ಪಷ್ಟತೆ ಇಲ್ಲದೆ ತೊದಲುತ್ತಿದ್ದೇನೆ
ನಾಲಿಗೆಗೆ ಭಯದ ಬರೆ ಎಳೆದದ್ದು ಯಾರೆಂದು
ಕೂಗುವ ಪ್ರಮೇಯ ನನಗಿಲ್ಲ
ಅಯ್ಯಾ ಎಂದು ಅರವುತ್ತಲಿದ್ದೇನೆ
ಅದು ನಮ್ಮ ಸಮ್ಮಾನಕ್ಕೆ ಕೋರಿದ್ದೆಂದು
ನಿನ್ನೊಳಗೆ ಅರಿವಾಗಬೇಕು
ಹಿಂಡುವ ಹಸಿವೆನೆಡೆ ಎಗ್ಗಿಲ್ಲದ ನನಗೆ
ವರ್ಣ ಹೀನತೆಯ ನಿಕೃಷ್ಟತೆ ಹೇರಿದ ನೆನಪು
ನಿನ್ನಲ್ಲಿ ಮರುಕಳಿಸಬೇಕು
ನನ್ನ ನಾಲಿಗೆಯ ಭಾಷೆ ನಿನ್ನ ನೆರಳಿನ ಸನಿಹ
ಇಲ್ಲವೆಂದರೂ ಪರಿಹಾಸ ಮಾಡದಿದ್ದರದೇ
ನಮಗೆ ಪರಾಕು
ಎತ್ತದಿರಿ ಏರಿಸದಿರಿ ಮುಟ್ಟಿ ಮಣೆ ಹಾಕದಿರಿ
ಸಕಲ ಸವಲತ್ತುಗಳಿಂದ ನನ್ನ ಉದ್ಧಾರದ
ಕತೆ ಕಟ್ಟದಿದ್ದರೆ ಸಾಕು
ಬಂಧುವಾಗೆಂದು ಕೋರುವ ಕಾಮನೆಗಳಿಲ್ಲ
ಬರಿಯ ಗೆಳೆಯನೆಂದು ನನ್ನ ಸಾವರಿಸು;
ಬಿಟ್ಟು ಧಿಮಾಕು
ಕುಹಕತೆ ಬಿಟ್ಟರೆ ನಮ್ಮಗಾಯಕ್ಕೆ ಮುಲಾಮು
ಅಸಡ್ಡೆಗಳ ತೊರೆದೊಗೆದರೆ
ಇದೊ ನಿನಗೆ ಸಲಾಮು
ನಿನ್ನ ಹೃದಯ ವೈಶಾಲ್ಯತೆಯ ಕಟ್ಟುಕತೆಗಳ
ಬಗೆದು ಒಗೆಯುತ್ತೀಯ
ಶುಭ್ರವಾಗುತ್ತೀಯ ನನ್ನ ತೀರ ?
(“ಪಂಜು” ಇ-ಪತ್ರಿಕೆಯಲ್ಲಿ ಪ್ರಕಟಿತ – Link address:
(http://www.panjumagazine.com/?p=13240)
ಚಿತ್ರ ಕೃಪೆ: ಅಂತರ್ಜಾಲ
Superb Kavana (y)
ಮೆಚ್ಚುಗೆಗೆ ಧನ್ಯವಾದಗಳು, ಕವಿ ಹುಸೇನಿ.
Congratulations.
Thank you.
ಎಲ್ಲ ಅವರವರ ತೀರದ ಶೋಧ, ಶುದ್ದತೆಯಲ್ಲಿ ಕಂಗಾಲಾದವರೆ ಅಲ್ಲವೇ ? ಶೋಧನೆ, ಪರಿಶೋಧನೆ ಎರದೂ ಚೆನ್ನಾಗಿದೆ ಕವಿತೆಯಲ್ಲಿ 👍😊👌👏🏻
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ನಾಗೇಶ್.